Sunday, December 23, 2018

ಶಂಖ ಪರಿವಾರದ ಜೊತೆ ಒಂದು ದಿನ

ತೂಗುದೀಪ ಶ್ರೀನಿವಾಸ್ ಮಾದರಿಯಲ್ಲಿ ಗಹಗಹಿಸಿ ನಗುತ್ತಿದ್ದ ಸದ್ದು ಅಲ್ಲೆಲ್ಲಾ ಪ್ರತಿಧ್ವನಿಸಿತ್ತು.. ಹತ್ತು ವರ್ಷಗಳಿಂದ ಈ ಸದ್ದು ಕೇಳಿ ಅಭ್ಯಾಸವಾಗಿದ್ದ ಈ ನಗುವಿನ ಅಲೆಯ ಹಿಂದೆ ಇದ್ದ ವ್ಯಕ್ತಿ ಯಾರು ಎನ್ನುವುದು ಗೊತ್ತಿತ್ತು.. ಎಲ್ಲರೂ ಇವನ ಕಡೆ ನೋಡಿ ಒಂದು ನಗೆ ಬೀರಿದರು..

"ಏನೋ ರಾಜ.. ಬಹಳ ಖುಷಿಯಾಗಿದ್ದೀಯ.. ಏನು ಸಮಾಚಾರ" ಅಲ್ಲಿದ್ದ ಒಬ್ಬ ಕೇಳಿದ

"ಇವತ್ತು ನನ್ನ ಕುಟುಂಬ ವೃಕ್ಷದ ಕೆಲವು ಕೊಂಬೆಗಳನ್ನು ನೋಡಬಹುದು ಅಂತ ಖುಷಿ"

"ಹೌದಾ.. ಸರಿ ನೀ ಹೋಗಿ ಬಾ.. ನಿನ್ನ ಕತೆ ಕೇಳಲು ನಾ ಇಲ್ಲಿಯೇ ಕಾಯುತ್ತಿರುವೆ.. " ಎಂದು ಹೇಳಿ ಆ ವ್ಯಕ್ತಿ ನೆಡೆಯುತ್ತ ಹೋಗಿ ಆ ತಿರುವಿನಲ್ಲಿ ಮರೆಯಾದ..

*****

ಉತ್ಸುಕತೆಯಿಂದ ಕಾಯುತ್ತಿದ್ದವ.. ಅರಳಿಕಟ್ಟೆಯಲ್ಲಿ ಕೂತಿದ್ದ.. 

ಹಣೆಯಲ್ಲಿ ಢಾಳಾದ ವಿಭೂತಿ.. ಅದರ ಮಧ್ಯೆ ಕುಂಕುಮ, ಬಿಳಿ ಪಂಚೆ, ಶಲ್ಯ ಹೊದ್ದು.. ಮೊಗದ ಮೇಲೆ ದೇಶಾವರಿ ನಗೆ ಬೀರುತ್ತಾ ರಾಜ ಬಂದ.. 

"ಹೇಗಿತ್ತಪ್ಪ ನಿನ್ನ ಭೂಲೋಕ ಪಯಣ.. ಅದರ ಬಗ್ಗೆ ಹೇಳು ಮಾರಾಯ.. !"

"ನನ್ನ ಕುಟುಂಬದ ವೃಕ್ಷ ಹರಡಿರುವ ರೀತಿ ಖುಷಿಯಾಗುತ್ತಿದೆ.. ಕರುನಾಡಿನಿಂದ.. ದಾಟಿ ಸಪ್ತಸಾಗರದಾಚೆಗೆ ಹಬ್ಬಿರುವ ರೀತಿ ಖುಷಿ ಕೊಟ್ಟಿದೆ.. ನನ್ನ ಮಕ್ಕಳ ಸಾಧನೆ.. ಅವರ ಮಕ್ಕಳ ಆ ತುಂಟತನ ನೋಡುವುದೇ ಖುಷಿ.. ಚಿಕ್ಕಪ್ಪ ಚಿಕ್ಕಪ್ಪ ಎನ್ನುವ ಮೀರಾ, ಮಂಜು, ಗಿರಿ, ಸುಮ, ಸಂಧ್ಯಾ, ಲಕ್ಷ್ಮಿ, ವಿದ್ಯಾ.. ಮಾವ ಎನ್ನುವ ನಾಗೇಂದ್ರ, ಲಕ್ಷ್ಮಿ..   ಮಸ್ತ್ ಮಸ್ತ್.. 

ಹೋಮ ಕಾರ್ಯ ಸೊಗಸಾಗಿತ್ತು.. ಬೆಳಗ್ಗೆ ಬೇಗನೆ ಶುರುವಾಗಿದ್ದರಿಂದ ಹೆಚ್ಚು ಮಂದಿ ಬಂದಿರಲಿಲ್ಲ.. ಭಾನುವಾರ ಅಲ್ಲವೇ.. ಎಲ್ಲರೂ ತಡವಾಗಿ ಎದ್ದು ಬರುವವರಿದ್ದರೂ ಅನ್ಕೊಂಡು ನಾ ಎಲ್ಲರನ್ನು ನೋಡಲು ಕಾಯುತ್ತಾ ಕೂತಿದ್ದೆ.. ಹೋಮ ಹವನಾದಿಗಳು ನೆಡೆದಿದ್ದವು.. ಮಂತ್ರಘೋಷಗಳು ನನಗೆ ಬಲು ಇಷ್ಟ.. ಅಲ್ಲಿಯೇ ಹತ್ತಿರದಲ್ಲಿ ಕೂತಿದ್ದೆ.. ಪುರೋಹಿತರ ಜೊತೆಯಲ್ಲಿ ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಮಂತ್ರಗಳನ್ನು ಹೇಳುತ್ತಿದ್ದೆ.. ಏನೋ ಒಂದು ರೀತಿ ಮನಸ್ಸಿಗೆ ಖುಷಿ ನೀಡಿತ್ತು... 

ಹತ್ತುಘಂಟೆ ಕಳೆದಿತ್ತು.. ಒಬ್ಬೊಬ್ಬರಾಗಿ ಬರಲು ಶುರು ಮಾಡಿದರು.. ಮೀರಾಳ ಮದುವೆಗೆ ಮಾತ್ರ ನಾ ಇದ್ದೆ..ಆಮೇಲೆ ನೆಡೆದ ಮದುವೆಗಳನ್ನೆಲ್ಲ ಇಲ್ಲಿಂದಲೇ ನೋಡಿದ್ದು.. ಎಲ್ಲಾ ಜೋಡಿಗಳನ್ನು ನೋಡಿ ಮನಸ್ಸಿಗೆ ಸಂತೋಷವಾಗಿತ್ತು.. 

ಮೀರಾ-ಕುಮಾರ ಕುಟುಂಬ.. ಅವರ ಮುದ್ದು ಮಕ್ಕಳು.. 
ಸುಮಾ-ರಾಘವೇಂದ್ರ-ಮಗು ಮುದ್ದಾದ ಕುಟುಂಬ 
ಲಕ್ಷ್ಮಿ-ಯೋಗಾನಂದ್-ಅವರ ಮುದ್ದಾದ ಮಕ್ಕಳು 
ಗಿರಿ ಒಬ್ಬನೇ ಬಂದಿದ್ದರೂ, ಮುದ್ದಾದ ಮಗು ಮತ್ತು ಮಡದಿಯ ಬಗ್ಗೆ ಅವನ ಮಾತುಗಳು ಇಷ್ಟವಾದವು 
ಮಂಜು-ಸುಮಾ ಮತ್ತು ಆ ಛೋಟಾ ಪುಟಾಣಿ.. 
ನಾಗಲಕ್ಷ್ಮಿ ಮತ್ತು ಮಗು ಸುಂದರ.. ನಾಗೇಶ್ ಬಂದಿರಲಿಲ್ಲ..  
ಸಂಧ್ಯಾ-ಹನುಮೇಶ್ ಸುಂದರ ಜೋಡಿ 
ಕಾರ್ಯಕ್ರಮಕ್ಕೆ ಬರಲಿಲ್ಲವಾದರೂ ವಿದ್ಯಾಳನ್ನೇ ಹೋಲುತ್ತಿದ್ದ ಒಬ್ಬಳು ಅಲ್ಲಿ ಓಡಾಡುತ್ತಿದಳು .. ವಿದ್ಯಾ-ಅರವಿಂದ್ ಜೋಡಿ ಮನೇಲೆ ಇದ್ದರು ಎಂದು ಲಕ್ಷ್ಮಿಯಿಂದ ತಿಳಿಯಿತು.. 
ನಾಗೇಂದ್ರ ಒಬ್ಬನೇ ಬಂದಿದ್ದ.. ಮಗುವಿನ ಬಗ್ಗೆ ಹೇಳಿದ್ದು.. ತನ್ನ ಮಡದಿಯ ಬಗ್ಗೆ ಹೇಳಿದ್ದು ಕೇಳಿದೆ.. 

ಇವರನ್ನೆಲ್ಲಾ ಒಂದೇ ಫ್ರೇಮಿನಲ್ಲಿ ನೋಡಿದ್ದು ಸೂಪರ್ ಇತ್ತು.. 

ಈ ಕಾರ್ಯಕ್ರಮ ನೆಡೆದ ಸ್ಥಳವೂ ಸುಂದರವಾಗಿತ್ತು.. ವಿಶಾಲವಾದ ದೇವಸ್ಥಾನ.. ಓಡಾಡಲು ಬೇಕಾದಷ್ಟು ಜಾಗ.. ಒಂದು ರೀತಿಯಲ್ಲಿ ಆಧುನಿಕತೆಯ ಸೋಗು ಇಲ್ಲದೆ ಇದ್ದರೇ ಹಳ್ಳಿವಾತಾವರಣದಂತೆ ಇದ್ದ ಜಾಗ.. ಅಲ್ಲಿನ ತಾಣವನ್ನು ಒಮ್ಮೆ ನೋಡು.. !!!

ವಿಶಾಲವಾದ ದೇವಾಲಯ 

ಆದಿ ಪೂಜಿತ ಗಣಪ 

ಬೃಹತ್ ರಾಜಗೋಪುರ 

ನಾಗರಕಟ್ಟೆ 

ನನ್ನ ಕುಟುಂಬದಂತೆ ಅರಳಿರುವ ಅಶ್ವಥ್ ವೃಕ್ಷ 

ಅಲ್ಲೊಂದು ಕಲಿಕಾ ಕೇಂದ್ರ

ಗರುಡ ಕಂಬ.. 

ಹೀಗೊಂದು ನೋಟ 
ಅಕ್ಷರಾಭ್ಯಾಸ, ಸತ್ಯನಾರಾಯಣ ಪೂಜೆ ಸಾಂಗೋಪಾಂಗವಾಗಿ ನೆರವೇರಿತು.. ಈ ಕಾರ್ಯಕ್ರಮಗಳೆಲ್ಲ ಕೌಟುಂಬಿಕ ಮಿಲನ ಅಲ್ಲವೇ.. ಬಂದವರೆಲ್ಲ ಬಂಧು ಮಿತ್ರರಜೊತೆಯಲ್ಲಿ ಮಾತು ಮಾತು ಮಾತು.. 

ಬೆಳಗಿನ  ಉಪಹಾರ ರುಚಿಯಾಗಿತ್ತು.. ಊಟ ಭರ್ಜರಿ.. ಎಲ್ಲರೂ ತಾಂಬೂಲ ಪಡೆದು ಹೊರಟಾಗ ಮನಸ್ಸು ಭಾರವಾಗಿತ್ತು.. ಕೆಲವರ ಚಿತ್ರಗಳು ಸಿಕ್ಕಿದವು.. ಕೆಲವರು ಹೊರತು ಬಿಟ್ಟಿದ್ದರು.. ಆದರೂ ಅವರನ್ನೆಲ್ಲ ಒಂದೇ ಕಡೆ ನೋಡಿದ್ದು ಖುಷಿಯಾಗಿತ್ತು.. ಅವರನ್ನೆಲ್ಲ ಮಾತಾಡಿಸಲು ಸಾಧ್ಯವಾಗಲಿಲ್ಲ.. ಆದರೆ ಎಲ್ಲರ ಮನಸ್ಸಿನಲ್ಲಿ ನಾ ಇದ್ದೆ ಎನ್ನುವುದು ನನಗೆ ಗೊತ್ತಿತ್ತು.. 

ಶ್ರೀಕಾಂತ ಮನಸ್ಸಿನಲ್ಲಿ ಅಂದುಕೊಂಡ.. "ರಾಜಾ ಇಲ್ಲಿ ಇದ್ದಿದ್ರೆ.. .. ಛೆ ಎಂಥ ಮಾತು.. ರಾಜಾ ನಮ್ಮೊಳಗೇ ಇದ್ದಾನೆ.. ಅವನು ಎಲ್ಲೂ ಹೋಗಿಲ್ಲ" ಅಂದಾಗ ಮನಸ್ಸಿಗೆ ನೆಮ್ಮದಿ.. 

ನೋಡಪ್ಪ.. ಒಂದಷ್ಟು ಚಿತ್ರಗಳನ್ನು ಕ್ಲಿಕ್ ಮಾಡಿ ನಿನಗೋಸ್ಕರ ತಂದಿದ್ದೇನೆ.. ನೋಡು ಎನ್ನುತ್ತಾ 9886155232 ನಂಬರ್ ಇರುವ ಮೊಬೈಲಿನಲ್ಲಿ ಚಿತ್ರಗಳನ್ನು ತೋರಿಸುತ್ತಾ ಹೋದ.. ಆ ಚಿತ್ರಗಳು ನಿಮಗಾಗಿ ಇಲ್ಲಿವೆ.. 



















ಎಲ್ಲಾ ಚಿತ್ರಗಳನ್ನು ನೋಡಿ ಇಬ್ಬರೂ ಮತ್ತೊಮ್ಮೆ ಸಂತೋಷ ಪಟ್ಟರು.. ರಾಜ ನಿನ್ನ ಭೂಲೋಕ ಪಯಣ ಸೂಪರ್ ಕಣೋ.. ಈ ರೀತಿಯ ಪಯಣ ನೆಡೆಯುತ್ತಲೇ ಇರಲಿ.. ಹಾಗೆ ನಿನ್ನ ಕುಟುಂಬದಲ್ಲಿ ಈ ರೀತಿಯ ಸಂಭ್ರಮದ ಕಾರ್ಯಕ್ರಮಗಳು ಆಗುತ್ತಲೇ ಇರಲಿ.. ಶುಭವಾಗಲಿ.. !!!

ಹಾಗೆ ಇಬ್ಬರೂ ನೆಡೆಯುತ್ತಾ ನೆಡೆಯುತ್ತಾ ತಿರುವಿನಲ್ಲಿ ಚುಕ್ಕೆಯಾಗಿ ಗಗನದಲ್ಲಿ ತಾರೆಗಳಾದರು.. !!!

2 comments:

  1. ನಿನ್ನ ಲೇಖನ ಇಂದಿನ ಇಡೀ ಕಾರ್ಯಕ್ರಮದ ಸಿಂಹಾವಲೋಕನದ ಅಕ್ಷರರೂಪ ಬಹಳ ಚೆನ್ನಾಗಿದೆ. ನಮ್ಮ ಮೆಚ್ಚಿನ ರಾಜನ ಅನುಪಸ್ಥಿತಿಯ ಬಗ್ಗೆ ಯೋಚಿಸದೆ ತಪ್ಪು ಮಾಡಿದೆ ಎನಿಸಿತು.ರಾಜಾ ಎಂದೂ ಮಹಾರಾಜನೇ!

    ReplyDelete
    Replies
    1. ಧನ್ಯವಾದಗಳು ಶಾಮಣ್ಣ.. ರಾಜ ನಮ್ಮ ಹೃದಯದಲ್ಲಿ ಇಂದಿಗೂ ಮಹಾರಾಜನೇ..

      Delete